Tuesday, June 18, 2013

ಬೆಳದಿಂಗಳೇ

ಮುಂಗುರುಳ 
ಮೋಡಗಳ
ನಡುವೆ ಇರುವ 
ಬೆಳದಿಂಗಳೇ 
ಸರಿಸೆ 
ತುಸು ತಲೆಯ 
ಮೇಲಿರುವ ಸೆರಗ 
ಈ ಮನದ 
ಅಮಾವಾಸ್ಯೆಯ 
ಕತ್ತಲು ತೊಲಗಲಿ

ಮನುಜ ಜನುಮ

ಇರುವೆಯಲ್ಲ 
ನೀ 
ಹುಳ ಹುಪ್ಪಟೆಯಲ್ಲ 
ನೀ
ತಳೆದ ಮೇಲೇ
ಮನುಜ ಜನುಮ 
ಏನಾದರೂ 
ಜಗಕೆ ಸಾಧಿಸಿ 
ತೋರಬೇಕಲ್ಲ 
ನೀ

Monday, June 17, 2013

ತಾತ್ಕಾಲಿಕ ಶಾಶ್ವತ

ಕೆಲವು ಭಾವನೆಗಳು ತಾತ್ಕಾಲಿಕ 

ಆದರೆ ನೆನಪುಗಳು ಶಾಶ್ವತ 


ಕೆಲವು ನಗು ತಾತ್ಕಾಲಿಕ 


ಆದರೆ ಅವು ತಂದ ಸಂತಸ ಶಾಶ್ವತ 


ಕೆಲವು ಸ್ಪರ್ಶಗಳು ತಾತ್ಕಾಲಿಕ 


ಆದರೆ ಅವುಗಳ ಅನುಭೂತಿ ಶಾಶ್ವತ 


ಕೆಲವು ಅನುಭವಗಳು ತಾತ್ಕಾಲಿಕ 


ಆದರೆ ಅದನನುಭವಿಸಿ ಬರೆದ ಕವನ ಶಾಶ್ವತ

Sunday, June 16, 2013

10

ಹನಿ ಹನಿ ಯಲ್ಲೂ ಕಾಣುತ್ತಿರುವೆ ನೀನು 
ಮತ್ತೆ ಮಳೆಯಲ್ಲಿ ನೆನೆಯುತಿರುವೆ ನಾನು

9

ನನ್ನ ಮನದಾಳದ ಮಾತು 
ಹೇಳಲು ಬರೆಯಲೇಬೇಕು 
ನನ್ನ ಮನದನ್ನೆಯ ಬಾಳು 
ಬೆಳಗಲು ನಾ ಬದುಕಲೇಬೇಕು

8

ಆಕಾಶ ಮುಟ್ಟ ಬೇಕೆಂದು 
ಕನಸುಗಳ ಏಣಿ ಹತ್ತುತ್ತಿಲ್ಲ 
ಈ ವೈಫಲ್ಯಗಳ ಕೂಪದಿಂದ 
ಹೊರಬಂದರಷ್ಟೇ ಸಾಕೆನಿಸುತ್ತಿಲ್ಲ

8

ತಲೆ ತಗ್ಗಿಸದಿರಲು ಇರುವುದು 
ಮೈ ಬಗ್ಗಿಸಿ ದುಡಿಯುವುದೊಂದೇ ದಾರಿ 

ಮನ ನೊಯಿಸದಿರಲು ಇರುವುದು 
ಮನವೊಲಿಸುವುದೊಂದೇ ದಾರಿ 

ಸದಾ ಸ್ನೇಹದಿಂದಿರಲು ಇರುವುದು 
ವಿಶ್ವಾಸವೊಂದೇ ದಾರಿ

7

ನನ್ನ ಕಾಲು ಮುರಿದಿದೆ 
ಆದರೆ ಕನಸುಗಳಲ್ಲ 

ನನ್ನ ಕಲರವ ಅಡಗಿದೆ 
ಆದರೆ ಕನವರಿಕೆಗಳಲ್ಲ 

ನನ್ನ ಶಕ್ತಿ ಕುಗ್ಗಿದೆ 
ಆದರೆ ಆತ್ಮವಿಶ್ವಾಸವಲ್ಲ 

ಮತ್ತೆ ಏಳುವೆ 
ಮತ್ತೆ ಪುಟಿಯುವೆ
ಮತ್ತೆ ಚಿಮ್ಮುವೆ
ಮತ್ತೆ ಹಾಡುವೆ

6

ನಿನಗಾಗಿ ಕಾದು 
ಕತ್ತಲಾಯಿತೆಂದು 
ನನಗೆ ಬೇಸರವಿಲ್ಲ 

ಗೆಳತಿ, ಬರುವಾಗ 
ಜೊತೆಯಲ್ಲಿ 
ಹುಣ್ಣಿಮೆ ತರುವೆಯಲ್ಲ

ಕಣ್ಣ ಬಾಣ

ನಿನ್ನ ಕಣ್ಣ ಬಾಣದ ಹಿತವಾದ ತಿವಿತಕ್ಕೆ 
ಮತ್ತೆ ಮತ್ತೆ ಸಾಯಬೇಕನಿಸುತ್ತದೆ ಎನಗೆ

ಜವಾಬ್ದಾರಿ

ಪ್ರೀತಿಯಲ್ಲಿ ಜವಾಬ್ದಾರಿಯೂ ಇರಲಿ 
ಜವಾಬ್ದಾರಿಯಲ್ಲಿ ಪ್ರೀತಿಯೂ ಇರಲಿ

ಅಪ್ಪಾ

ನಾ ಅವಳನ್ನು ಕೇಳಿದೆ 
ಆಟ ಆಡೋಕೆ ನಿನಗೆ ಏನು ಬೇಕು ?
ಅವಳೆಂದಳು 'ಅಪ್ಪಾ, ನೀ ಬೇಕು '

5

ನಿದ್ದೆಗೆಂದು ಕಣ್ಣು ಮುಚ್ಚುವುದು 
ನೆಪ ಮಾತ್ರ 
ಅದರಲ್ಲಿ ಆವರಿಸುವುದು 
ನೀ ಮಾತ್ರ

4

ಪಡುವಣದಲ್ಲಿ ಮುಳುಗುವ 
ಕೆಂಪು ಕೆಂಪಾದ ಸೂರ್ಯ 
ಕಾಣುವನು ಸೇಬಿನಂತೆ 
ಗೆಳತಿಯನ್ನು ಕಾಣಲು ಹೋಗುವ 
ಹದಿ ಹರೆಯದ ಪೋರ 
ಹೊಸ ಕಾಂತಿ ಹೊಂದಿದಂತೆ

ಹತ್ಯೆ

ಹತ್ಯೆ 
=======
ನೇಣು ಹಾಕಿಕೊಳ್ಳಬೇಕು ಅಂತಾ ಫ್ಯಾನಿಗೆ ಹಗ್ಗ ಸಿಕ್ಕಿಸಿದ, ಕುತ್ತಿಗೆ ವರೆಗೂ ಉದ್ದ ಸಾಲುತ್ತ ಅಂತಾ ಒಮ್ಮೆ ನೋಡ್ ಕೊಂಡ ಕುತ್ತಿಗೆಗೆ ಹಗ್ಗ ಸಿಗಿಸಿ ಕೊಳ್ಳೋ ಮೊದಲು ಯೋಚನೆಗೆ ಬಿದ್ದ, ನಾ ಯಾಕ್ ಆತ್ಮಹತ್ಯೆಗೆ ಪ್ರಯತ್ನಿಸ್ತಾ ಇದ್ದೀನಿ ಅಂತ ಕಷ್ಟಗಳಿಗೆ ಹೆದರಿ ಸಾಯೋದಕ್ಕೆ ಹೊರಟಿದ್ದೀನಿ ಅಂತ ಅನ್ನಿಸ್ತು , ಆಮೇಲೆ ತಾನು ಅವಗಳನ್ನು ಎದುರಿಸೋಕಾಗದೆ ಇರೋ ಹೇಡಿ ಅಂತಾನು ಅನ್ನಿಸ್ತು.

ಈಗ ಅವನು ಯೋಚನೆಗ್ ಬಿದ್ದ ಎರಡರಲ್ಲಿ ಒಂದರ ಹತ್ಯೆ ಆಗಲೇ ಬೇಕಿತ್ತು .. ಒಂದು ತಾನು ನೇಣು ಹಾಕೊಂಡು ತನ್ನತನವ ಹತ್ಯೆ ಮಾಡೋದು , ಇನ್ನೊಂದು ಬದುಕಿದ್ದು ತನ್ನ ಹೇಡಿತನದ ಹತ್ಯೆ ಮಾಡೋದು .... 

ಅಂತೂ ಆ ದಿನ ಒಂದು ಹತ್ಯೆ ನಡೆಯಿತು ...

ಈಗ ಅವನು ಆರಾಮವಾಗಿ ಎದೆ ಉಬ್ಬಿಸಿ ನಡೆದಾಡ್ತಾ ಇದ್ದಾನೆ, ಜೀವನವನ್ನ ಪ್ರೀತ್ಸೋಕ್ ಶುರು ಮಾಡಿದ್ದಾನೆ

3

ಮನಸೇಕೋ ಮುದುಡಿದೆ ಆವರಿಸಿ ಚಿಂತೆ 
ಈ ರಾತ್ರಿಯಾದರೂ ಬಾ ನಾನಿರುವೆ 
ಚಂದ್ರನಿಗಾಗಿ ಕಾದಿರುವ ನೈದಿಲೆಯಂತೆ