Sunday, March 5, 2017
Monday, July 11, 2016
ನಾ ಓದಿದ ಪುಸ್ತಕ - ಹೇಳಿ ಹೋಗು ಕಾರಣ - ರವಿ ಬೆಳಗೆರೆ
ನನಗೇಕಿಷ್ಟ ರವಿ ಬೆಳಗೆರೆ ? ಅವರು ಬರೆಯುವ ಶೈಲಿಯೇ ಹಾಗಿದೆ. ಅವರ ಕಥೆಯನ್ನು ಕಟ್ಟುವ ರೀತಿಯೇ ಹಾಗಿದೆ.
“ಒಂದು ಮುನಿಸಿಕೊಂಡಿರುವ ಕನಸು ಹುಡುಕಿಕೊಂಡು ಬಂದಿದೀನಿ. ನಿಮಗೇನಾದರೂ ಅದು ಇದಿರಾದರೆ, ನಾನಿಲ್ಲಿ ಕಾಯ್ತಿದೀನಿ ಅಂತ ತಿಳಿಸಿಬಿಡಿ. ಬೈದಿಬೈ – ಕನಸಿನ ಹೆಸರು ಪ್ರಾರ್ಥನಾ ?”
“ಹೇಳಿ ಹೋಗು ಕಾರಣ” ಓದಿದೆ. ಓದಿ ಮುಗಿಸಿದ ಮೇಲೆ ಬಾಯಾರಿದವನಿಗೆ ನೀರಿನ ಬದಲು ತುಸು ಶೇಂದಿ ಬೆರೆತ ಎಳೆನೀರು ಕುಡಿದಷ್ಟು ಸಂತೃಪ್ತಿ.
ಕಥೆಯು ಕೆಲವು ಕಡೆ ಕುತೂಹಲ ತಿರುವುಗಳನ್ನು ಪಡೆಯುತ್ತದೆ. ಕೆಲವೊಮ್ಮೆ ಕಥಾನಾಯಕ ಹಿಮವಂತ್ ಖಳನಾಯಕನಾಗಿ ಬದಲಾಗಿ ಹೋದನೇ ಎಂದು ಭಾಸವಾಗುತ್ತದೆ. ಮನಸ್ಸಿದ್ದರೆ ಮಾರ್ಗ ಎನ್ನುವ ಸಂದೇಶವನ್ನು ಈ ಕಥೆ ಸಾರುತ್ತದೆ.
ಕೆಲವು ಕಡೆ ಸ್ವಗತದಲ್ಲಿ ಮತ್ತೆ ಮತ್ತೆ ಹಳೆಯ ಸಾಲುಗಳು ಪುನರಾವರ್ತನೆಯಾಗಿವೆ, ಬಹುಶಃ ಇದು ಧಾರಾವಾಹಿಯಾಗಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದರಿಂದ ಓದುಗರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶ ಇರಬಹುದು.
ಎಷ್ಟೇ ಹತ್ತಿರವಿದ್ದರೂ ದೈಹಿಕ ಸುಖ ಪಡೆಯದೇ ಒಬ್ಬ ವ್ಯಕ್ತಿ ತನ್ನವಳನ್ನು ಎಷ್ಟೊಂದು ಗಾಡವಾಗಿ ಪ್ರೀತಿಸಬಹುದು ಎನ್ನವ ಅನುಭವ ನಮ್ಮದಾಗುತ್ತದೆ. ಹಲವಾರು ಘಟನೆಗಳು, ಮಾತುಕತೆಗಳು ನಮ್ಮ ಜೀವನದಲ್ಲಿ ನಡೆಯುತ್ತಿರುತ್ತವೆ, ಅವುಗಳಲ್ಲಿ ಕೆಲವು ಅಕ್ಷರ ರೂಪದಲ್ಲಿ ಇಲ್ಲಿ ಮೂಡಿ ಬಂದಿವೆ.
Subscribe to:
Posts (Atom)


