ಜಗಲಿಯಲ್ಲಿ ಕುಳಿತಿದ್ದ ಮಗು ಅಳುತ್ತಿತ್ತು
ಹತ್ತಿರ ಹೋದೆ, ಮಗು ಇನ್ನಷ್ಟು ಬಿಕ್ಕಿ ಬಿಕ್ಕಿ ಅತ್ತಿತು
ಅರ್ಥವಾಗಲಿಲ್ಲ ಮಗು ಏಕೆ ಅಳುತ್ತಿ ಎಂದು
ಸ್ವಲ್ಪ ಹೊತ್ತಿನಲ್ಲಿ ಅದು ಎದ್ದು ಒಳ ನಡೆಯಿತು
ಅಮ್ಮ ಹೊರಬಂದಳು ಅವಳ ಕೈಲಿ ರೊಟ್ಟಿ ಇತ್ತು
ಅಮ್ಮ ರೊಟ್ಟಿಯನ್ನು ಹಸಿದಿದ್ದ ನಾಯಿಗೆ ಹಾಕಿದಳು
ಮಗು ತಟ್ಟನೆ ಅಳು ನಿಲ್ಲಿಸಿತು
ಮಗುವಲ್ಲಿರುವ ಮನಸ್ಸು
ಬೆಳೆದ ಮೇಲೆ ಏಕೆ ಸುಟ್ಟು ಹೋಗುತ್ತದೆ?
ಇದು ಹಿರಿಯ ಸಾಹಿತಿಗಳಾದ ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನದ ಒಂದು ಚೆಂದದ ಕವನ.
ಪ್ರಕಾಶಕರು: ಋತುಸೌರಭ ಫೌಂಡೇಶನ್.
Wednesday, November 26, 2025
Book ಶ್ರೀಮತಿ ಪ್ರೇಮಾ ಭಟ್ ಮೇಡಂ ಅವರ ʼಅಮ್ಮನ ನುಡಿಗಳುʼ ಕವನ ಸಂಕಲನ Ammana NudigaLu by Prema Bhat
Monday, February 26, 2024
Mumbai Jeevana ಮುಂಬೈ ಜೀವನ
“ಆ ಒಂದು ಹಸಿವಿನ ಸಮಯದಲ್ಲಿ ನಾನು ಪಟ್ಟ ಪಾಡು ಮಾತ್ರ ಮುಂದೆ ಯಾರಿಗೂ ಬಾರದಿರಲಿ. ಆಗಾ ಜಾತಿ, ಧರ್ಮ ಯಾವುದನ್ನೂ ನೋಡಲಿಲ್ಲ, ಇಲ್ಲಿ ಎಲ್ಲಾ ಜಾತಿಯವರು ಇದ್ದರು.”
“ನನಗೆ ನಾನು ಮಾಡಿದ ಕೆಲಸದಿಂದ ಯಾರಾದರೂ ಖುಷಿ ಪಟ್ಟು ಅವರ ಮುಖ ಊರಗಲವಾದರೆ, ನನಗೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಯಾವುದೂ ಇರಲಿಲ್ಲ”
“ಮುಂಬೈ ಜೀವನ”
ಶ್ರೀಮತಿ ವಸುಧಾ ಪ್ರಭು ಅವರ ಪುಸ್ತಕ “ಮುಂಬೈ ಜೀವನ”ವನ್ನು ಓದುತ್ತಿದ್ದರೆ ಅವರು ಒಂದು ಫ್ಲಾಸ್ಕಿನಲ್ಲಿ ಚಹಾ ತಂದು ಮುಂದಿಟ್ಟು ಅವರ ಅನುಭವ ಕಥನಗಳನ್ನು ಹೇಳುತ್ತಾ ಒಂದು ಕಪ್ಪಿನಲ್ಲಿ ಆಗಾಗ ಅರ್ಧ ಮಟ್ಟದವರೆಗು ತುಂಬಿಸಿ ಹಾಗೆಯೇ ಕುಡಿಯಲು ಕೊಡುತ್ತಿದ್ದಾರೆನ್ನುವಂತೆ ಭಾಸವಾಗುತ್ತದೆ. ಹೆಜಮಾಡಿಯಿಂದ ಅವರ ಮುಂಬಯಿಯವರೆಗಿನ ಜೀವನದ ಪಯಣದಲ್ಲಿ ಹಲವು ಏಳು ಬೀಳುಗಳನ್ನು ಕಂಡು ಒಬ್ಬ ಯಶಸ್ವಿ ವ್ಯಕ್ತಿಯ ಹಿಂದಿನ ಹೋರಾಟದ ಅನಾವರಣವೇ ಅವರು ಬರೆದ ಆತ್ಮಕಥೆ “ಮುಂಬೈ ಜೀವನ”. ಪುಸ್ತಕದ ಕಡೆಯ ಭಾಗಗಳಲ್ಲಿ ನಾವು ಚಹಾ ಬಹುತೇಕ ಕುಡಿದು ಮುಗಿಸುತ್ತಿರುವಾಗ ಅವರು ಈಗಾಗಲೇ ಅರವತ್ತೆಂಟು ವಸಂತಗಳನ್ನು ಪೋರೈಸಿರುವ ಅರಿವಾಗುತ್ತದೆ.
ಅವರ ಬರಹದ ಶೈಲಿಯು ಒಂದು ಅಧ್ಯಾಯದಿಂದ ಮತ್ತೊಂದು ಅಧ್ಯಾಯಕ್ಕೆ ಕುತೂಹಲದಿಂದ ಪುಸ್ತಕವನ್ನು ಓದಿಸಿಕೊಡು ಹೋಗುತ್ತದೆ. ಕವಯತ್ರಿ, ಲೇಖಕಿ, ವಾಗ್ಮಿ, ಪ್ರಸಾಧನ ತಜ್ಞೆ, ನಟಿ, ನಾಟಕ, ಸಿನಿಮಾ, ವರ-ವಧಾನ್ವೇಷಣೆ, ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವಿಕೆ, ಹೀಗೆ ಲೇಖಕಿಯರ ಹಲವಾರು ಮುಖಗಳ ಪರಿಚಯವಾಗುತ್ತದೆ.
ಈ ಕೃತಿಯನ್ನು ಸಾಧ್ಯವಾಗಿಸಲು ಕಾರಣೀಭೂತರಾದ ಕನ್ನಡ ಕಥಾಗುಚ್ಛ ಬಳಗದ ಉತ್ತೇಜನವು ಪ್ರಶಂಸನೀಯ.
ಶ್ರೀಮತಿ ವಸುಧಾ ಪ್ರಭುರವರಿಂದ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಮನದಾಳದ ಹಾರೈಕೆ.
Thursday, June 29, 2023
Sparsha Shile Poetry
ಸ್ಪರ್ಶ ಶಿಲೆ
“ಹಟಹಿಡಿದ ಅವಳ ತಪಕ್ಕೊಲಿದು
ಕೈ ಹಿಡಿದ ಹೆಂಗರುಳಿನವನು
ಹೆಣ್ತನದ ಗಂಧದೊಳು ತನ್ನ ಬೆವರಿನ ಘಮ
ಬೆರೆಸಿ ಅಂಗಸಂಗದೊಳೊಂದಾದ
ಅರ್ಧನಾರೀಶ್ವರ “
ಲಾವಣ್ಯ ಪ್ರಭಾ ಅವರ ಕವನಗಳ ಗುಚ್ಛ ಸ್ಪರ್ಶ ಶಿಲೆ ಕವನ ಸಂಕಲನ. ಇದರಲ್ಲಿ ನಲವತ್ತು ಕವಿತೆಗಳಿವೆ, ಅವುಗಳಲ್ಲಿ
ಲಯರೂಪಿ, ನಿಲ್ಲಲಾರೆವು ಇನ್ನಿಲ್ಲಿ ನಾವು ಬಹುಕಾಲ, ಸ್ಪರ್ಶ ಶಿಲೆ, ಬುದ್ಧ ಪೂರ್ಣಿಮೆಯಂದು, ಯುಗಾದಿ, ಮೋಹತೀರ, ಅಂತಃಪುರ ಗೀತೆ, ಬೆಳಗಿನ ತಾಯಿ ಕತ್ತಲೆ, ಶಿವರಾತ್ರಿ, ಚೆಲುವ, ಕಾವ್ಯವೆನ್ನುವುದು ಶುದ್ಧ ಗಂಡು.... ನನ್ನ ಗಮನ ಹೆಚ್ಚು ಸೆಳೆದ ಕವಿತೆಗಳು.
ಕವಯತ್ರಿ ಶಿವನನ್ನು ಬಣ್ಣಿಸುವ ರೀತಿ ಅನನ್ಯವಾಗಿದೆ. ಅದು ಲಯರೂಪಿ ಮತ್ತು ಶಿವರಾತ್ರಿ ಕವನದಲ್ಲಿ ಬಹಳ ಚೆನ್ನಾಗಿ ಮೂಡಿದೆ.
ಶಿವನೆದೆಯಲ್ಲಿ ದೀಪ ಅವನ ಹೆಣ್ಣು”
ಮೇಲು ಕೋಟೆಯ ಚೆಲುವ ನಾರಾಯಣಸ್ವಾಮಿಯ ಮೋಹಿಸುವ ಹೊರಗಮ್ಮ ದೇವಿಯ ಬಗ್ಗೆ ಇರುವ ಕವನ ʼಚೆಲುವʼ ಮನಸೆಳೆಯುತ್ತದೆ
“ಹಾಗೆಲ್ಲ ಮುಟ್ಟುವ ಹಾಗಿಲ್ಲ” ಎನ್ನುವಂತ ಸಾಲುಗಳನ್ನೊಳಗೊಂಡ ʼಬುದ್ಧ
ಪೂರ್ಣಿಮೆಯಂದುʼ ಕವನವು ಯಶೋಮತಿಯ ತಳಮಳವ ನಮ್ಮೆದುರು ತೆರೆದಿಡುತ್ತದೆ.
ವಿವಿಧ ವಿಷಯಗಳ ಮೇಲೆ ಬರೆದಿರುವ ಕವನಗಳನ್ನು ಸ್ಪರ್ಶಶಿಲೆ ಕವನಸಂಕಲನವು
ಒಳಗೊಂಡಿದೆ.
ಇವರ ಕವನಗಳ ಕೊನೆ ಹಂತದ ಸಾಲುಗಳ ತೀಕ್ಷ್ಣತೆಗೆ ಒಂದು ಉದಾಹರಣೆ ʼಅಂತಃಪುರ ಗೀತೆʼ ಕವನದಲ್ಲಿದೆ.
ಅದರಲ್ಲಿಬಹು ದಿನಗಳ ನಂತರ ಹಿಂದುರಿಗಿದ ರಾಜನಿಗೆ ರಾಣಿಯು ಹೇಳುವ ಈ ಸಾಲುಗಳು ಮನಮುಟ್ಟುತವೆ.
“ಓಹ್! ಎದೆಗವಚ ಇನ್ನು ಯಾಕೆ?
ನಾನಿಲ್ಲವೇ?
ನಿಮ್ಮ ತುಂಟನಗು, ಆಸೆಗಣ್ಣು
ಅರ್ಥವಾಗುವುದೆನಗೆ
ಅದಕ್ಕೂ... ಮೊದಲು...
ನಿಮ್ಮ ರತ್ನಖಚಿತ “ಕಿರೀಟ”
ಕೊಂಚ.... ತೆಗೆದಿರಿಸಿ ದೂ..ರ
ನನ್ನ ದೊರೆ
ನಂತರ... ಸಗ್ಗ ಸೆರೆ”
ಬಹುತೇಕ ಕವಿಗಳು ಕವಿತೆ ಕಟ್ಟುವಾಗಿನ ಅನುಭವ ʼಕಾವ್ಯವೆನ್ನುವುದು ಶುದ್ಧ ಗಂಡುʼ ಕವನದಲ್ಲಿದೆ.
ಮತ್ತಷ್ಟು ಮಗದಷ್ಟು ಕವನಗಳು ಬರಲಿ ಎಂದು ಆಶಿಸುತ್ತಾ ಶುಭಕೋರುವೆ.





